ಬಾರ್ ಮುಚ್ಚಲು ಅಬಕಾರಿ ಸಚಿವರ ಸೂಚನೆ

ಮುಳಬಾಗಿಲು(ಕೋಲಾರ): ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿರುವ ಎಲ್ಲಾ ಬಾರ್‌ಗಳನ್ನ ಮುಚ್ಚಲು ಸೂಚಿಸಿದ್ದೇನೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ಕೋಲಾರದ ಮುಳಬಾಗಿಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ ಸೇರಿದಂತೆ ತಮಿಳುನಾಡಿನಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು,ಆ ಭಾಗದ ಜನರು ಮದ್ಯಕ್ಕಾಗಿ ಜಿಲ್ಲೆಗೆ ಬರುವ ಸಾಧ್ಯತೆ ಇದೆ.ಹಾಗಾಗಿ ಜಿಲ್ಲೆಯ ಗಡಿಯಲ್ಲಿರುವ ಮದ್ಯದಂಗಡಿಗಳನ್ನ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ ಮಾಲೂರಿಗೆ ಬಂದಿರುವ ತಬ್ಲೀಘಿಗಳ ಕುರಿತು ಮಾತನಾಡಿದ ಅವರು, ವಿಚಾರ ಹೇಳದೆ ಇದ್ದರೆ ಅದು ತಪ್ಪು.ಆದರೆ ಅವರು ಹೊರ ಬಂದು ಕ್ವಾರಂಟೈನ್ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Please follow and like us:

Related posts

Leave a Comment