ನಾನು ರಾಜೀನಾಮೆ ನೀಡಲು ಸಿದ್ದ : ಮುಖ್ಯಮಂತ್ರಿ ಹೆಚ್ ಡಿಕೆ

ಬೆಂಗಳೂರು: ನಾನು ರಾಜೀನಾಮೆಗೆ ಸಿದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ನಗರದಲ್ಲಿ 6 ಬೋಗಿಯ ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​​ ಶಾಸಕರು ಸಿದ್ದರಾಮಯ್ಯನವರೇ ತಮ್ಮ ಮುಖಂಡ ಎಂದು ಹೇಳುತ್ತಾರೆ, ಈ ಬಗ್ಗೆ ಏನು ಹೇಳುತ್ತೀರ ಎಂದು ಸಿಎಂಗೆ ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಈ ವಿಚಾರಗಳನ್ನೆಲ್ಲಾ ಕಾಂಗ್ರೆಸ್​ ನಾಯಕರೇ ನೋಡಿಕೊಳ್ಳಬೇಕು. ಇದು ನನಗೆ ಸಂಬಂಧವಿಲ್ಲ. ಅವರು ಇದನ್ನೇ ಮುಂದುವರೆಸುವುದಾದರೆ ನಾನು ನನ್ನ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರು ಮಿತಿ ಮೀರುತ್ತಿದ್ದಾರೆ. ಕೈ ನಾಯಕರು ತಮ್ಮ ಶಾಸಕರನ್ನು ಕಂಟ್ರೋಲ್​ ಮಾಡಬೇಕು ಎಂದರು. ನನ್ನ ಕೆಲಸಗಳು ಸಕ್ಸಸ್ ಆಗಿಲ್ಲ ಅಂದ್ರೆ ರಾಜೀನಾಮೆ ನೀಡುತ್ತೇನೆ. ನಾನು ನನ್ನ ಸ್ಟೈಲ್ ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ನನ್ನ ಯೋಜನೆಗಳು ಯಶಸ್ವಿ ಆಗದಿದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದರು.

Please follow and like us:

Related posts

Leave a Comment