ಟಿ.ನರಸೀಪುರ ತಾಲೂಕಿನಲ್ಲಿ ವರದಕ್ಷಿಣೆ ಕಿರುಕುಳ ಗರ್ಭಿಣಿ ಬಲಿ..?

ಟಿ.ನರಸೀಪುರ(ಮೈಸೂರು): ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಹೆಗ್ಗೂರು ಗ್ರಾಮದಲ್ಲಿ ಗರ್ಭಿಣಿಯೊಬ್ಬರು ಸಾವಿಗೀಡಾಗಿರೋದು ಬೆಳಕಿಗೆ ಬಂದಿದ್ದು,ಇದೀಗ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಶಾಕುAತಲ(೨೫)ಸಾವು ಕಂಡಿರುವ ಗರ್ಭಿಣಿಯಾಗಿದ್ದು, ಈಕೆ ಕಳೆದ ೫ ತಿಂಗಳ ಹಿಂದೆ ಚರಣ್ ರಾಜ್ ಎಂಬುವನ ಜೊತೆ ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ.
ಇನ್ನು ಈಕೆಯನ್ನು ಪತಿ ಚರಣ್ ರಾಜ್ ಕೊಲೆ ಮಾಡಿ ನೇಣು ಹಾಕಿದ್ದಾನೆ ಎನ್ನಲಾಗುತ್ತಿದ್ದು, ವರದಕ್ಷಿಣೆಗಾಗಿ ಈ ಕೃತ್ಯ ನಡೆಸಿದ್ದಾನೆಂದು ಮೃತ ಶಾಕುಂತಲ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದೇ ವೇಳೆ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬAಧ ದೂರು ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.ಆದರೆ ಈಗ ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ಟಿ.ನರಸೀಪುರ(ಮೈಸೂರು)

Please follow and like us:

Related posts

Leave a Comment