ಬೃಹತ್ ಆರ್ಥಿಕ ಪ್ಯಾಕೇಜ್; ಸಂಜೆ ವಿತ್ತ ಸಚಿವೆ ಲೆಕ್ಕ

ನವದೆಹಲಿ:೨೦ ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ ಬೃಹತ್ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅಂದ ಹಾಗೇ ನಿನ್ನೆ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ೨೦ ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ನಿನ್ನೆ ಘೋಷಿಸಿದ್ದರು.ಅಲ್ಲದೆ,ಇದರ ಬಗ್ಗೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಲಿದ್ದಾರೆ ಎಂದಿದ್ದರು.
ಹೀಗಾಗಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಮೊತ್ತ ಮತ್ತು ಅದನ್ನು ಹೇಗೆ ಬಳಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ನೀಡುತ್ತಾರೆ.ಈ ಆರ್ಥಿಕ ಪ್ಯಾಕೇಜ್ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಯ ಶೇ ೧೦ ರಷ್ಟಿದೆ.ಇದು ದೇಶದ ವಿವಿಧ ಸ್ತರದ ಆರ್ಥಿಕ ವ್ಯವಸ್ಥೆಗೆ ಸಂಬAಧಿಸಿದ ವಿಭಾಗಗಳಿಗೆ ಬೆಂಬಲದೊAದಿಗೆ ಶಕ್ತಿ ತುಂಬಲಿದೆ.
ಇನ್ನು ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು, ಜಾನುವಾರು ಸಾಕುವವರು, ಮೀನುಗಾರರು, ಸಂಘಟಿತ ಅಥವಾ ಅಸಂಘಟಿತ ವಲಯ ಸೇರಿದಂತೆ ಪ್ರತಿ ವಲಯಕ್ಕೂ ಈ ಪ್ಯಾಕೇಜ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ನವದೆಹಲಿ

Please follow and like us:

Related posts

Leave a Comment