ಕೊರೊನಾ ಟೈಂನಲ್ಲಿ ಸ್ಮಶಾನಕ್ಕೆ ಭೇಟಿ, ಅಂಜುಮಾನ್ ಸಂಸ್ಥೆಗೆ ನೋಟಿಸ್

ಹುಬ್ಬಳ್ಳಿ:ಲಾಕ್ ಡೌನ್ ನಡುವೆಯೂ ಅಂಜುಮನ್ ಸಂಸ್ಥೆ ಏಪ್ರಿಲ್ ೯ ರಂದು ಶಾಬ್-ಇ-ಬರಾತ್ ಆಚರಿಸಲು ಸ್ಮಶಾನಕ್ಕೆ ಭೇಟಿ ನೀಡಿದ ಬಗ್ಗೆ ಹುಬ್ಬಳ್ಳಿ ಅಂಜುಮಾನ್-ಇ-ಇಸ್ಲಾA ಸಂಸ್ಥೆಯ ಪದಾಧಿಕಾರಿಗಳಿಗೆ ಕರ್ನಾಟಕ ವಕ್ಫ್ ಬೋರ್ಡ್ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದೆ.
ಕೋವಿಡ್-೧೯ ಸಾಂಕ್ರಾಮಿಕ ಮತ್ತು ಸರ್ಕಾರವು ವಿಧಿಸಿರುವ ಲಾಕ್‌ಡೌನ್ ದೃಷ್ಟಿಯಿಂದ ಸಭೆಯ ಪ್ರಾರ್ಥನೆಯನ್ನು ಸ್ಥಗಿತಗೊಳಿಸುವ ಸೂಚನೆಗಳ ಹೊರತಾಗಿಯೂ ಅಂಜುಮಾನ್-ಇ-ಇಸ್ಲಾAನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಸ್ಮಶಾನಕ್ಕೆ ಭೇಟಿ ನೀಡಿದ್ದಾರೆ.
ಇದು ೧೯೯೫ರ ವಕ್ಫ್ ಕಾಯ್ದೆಯ ಸೆಕ್ಷನ್ ೬೫(೫)ರ ಅಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ತಪ್ಪಾದ ಕೃತ್ಯವಾಗಿದ್ದು,ಕೂಡಲೇ ಅಂಜುಮಾನ್-ಇ-ಇಸ್ಲಾAನ ಪದಾಧಿಕಾರಿಗಳು ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ರಾಜ್ಯ ವಕ್ಫ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿದ್ದಾರೆ.
ಈ ಶಬ್ ಇ ಬಾರತ್ ನಡೆಸಿದ್ದ ಸ್ಮಶಾನದ ಕಾವಲುಗಾರನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,ಆತನ ಸಂಪರ್ಕದಲ್ಲಿದ್ದ ಹಾಗೂ ಅಂದು ಸ್ಮಶಾನದ ಪೂಜೆಯಲ್ಲಿ ಪಾಲ್ಗೊಂಡಿದ್ದ ಅಂಜುಮನ್ ಸಮಿತಿಯ ಹಲವರು ಈಗಾಗಲೇ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment